HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವ ಪರಿಣಾಮಗಳು, ಅದನ್ನು ತಡೆಯುವಲ್ಲಿ ಮಾನವ ಸಂಪನ್ಮೂಲ

11/29/2019

0 Comments

 
Picture
ಶಿವಕುಮಾರ
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ರಾಮನಗರ ಸ್ನಾತಕೋತ್ತರ ಕೇಂದ್ರ,
​ಬೆಂಗಳೂರು ವಿಶ್ವವಿದ್ಯಾಲಯ
ಸಾರಲೇಖ:
ಮಾನವ ಸಂಪನ್ಮೂಲ ವಿಭಾಗವು ಪ್ರಸ್ತುತ ಜಗತ್ತಿನಲ್ಲಿ ತನ್ನದೆ ಆದತಂಹ ಮಹತ್ವವನ್ನು ಪಡೆದಿದೆ ಹಾಗೂ ಉದ್ಯಮಗಳ ಏಳಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಅದರ ಬಹುಮುಖ್ಯ ಕಾರ್ಯಗಳಲ್ಲಿ ಕಾರ್ಮಿಕರ ನಿರ್ವಹಣೆಯು ಪ್ರಮುಖವಾದದ್ದು, ಅದರಲ್ಲಿ ಕಾರ್ಮಿಕರು ತನ್ನ ಉದ್ಯೋಗವನ್ನು ತೊರೆಯದಂತೆ (labour turnover) ನೋಡಿಕೊಳ್ಳುವುದು ಒಂದಾಗಿದೆ. ಉದ್ಯೋಗ ತೊರೆಯುವುದು (labour turnover) ಅದರ ಅರ್ಥ, ವ್ಯಾಖ್ಯಾನ, ನೌಕರರು ಉದ್ಯೋಗ ತೊರೆಯಲು ಕಾರಣಗಳು, ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವಂತಹ  ಪರಿಣಾಮಗಳು, ಇದರಿಂದ ಕಂಪನಿಯ ಅಭಿವೃದ್ಧಿಯ ಮೇಲಾಗುವ ಗಂಭೀರ ಪರಿಣಾಮಗಳು ಹಾಗೂ ಮಾನವ ಸಂಪನ್ಮೂಲ ವಿಭಾಗವು ನೌಕರರು ಉದ್ಯೋಗ ತೊರೆಯದ ಹಾಗೆ ಕಾರ್ಮಿಕರ ನಿರ್ವಹಣೆ ಹಾಗೂ ಅದರ ಮಾರ್ಗೋಪಾಯಗಳ ಬಗ್ಗೆ ವಿವರಿಸಲಾಗಿದೆ.

ಮಾನವ ಸಂಪನ್ಮೂಲದ ಹಿನ್ನೆಲೆಯಲ್ಲಿ ಹೇಳಬೇಕೆಂದರೆ ನೌಕರರು ಉದ್ಯೋಗ ತೊರೆಯುವಿಕೆ (labour turnover) ಅಂದರೆ ಕೆಲಸದ ಸಮಯದಲ್ಲಿ ನೌಕರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದು ಅಥವಾ ಉದ್ಯೋಗದಾತನು ತನ್ನ ಉದ್ಯೋಗಿಗಳನ್ನು ಕಳೆದುಕ್ಕೊಳ್ಳುವುದಾಗಿದೆ.  ಇದರಿಂದ ಕಂಪನಿಯ ಉತ್ಪಾದನೆ, ಆದಾಯ, ವೆಚ್ಚಗಳಲ್ಲಿ ಏರುಪೇರಾಗಿ ಸಮಸ್ಯೆಗಳು ಉಲ್ಬಣಗೊಂಡು ಕಂಪನಿ ಅವನತಿಯತ್ತ ಸಾಗಬಹುದು, ಆದ್ದರಿಂದ ಕಾರ್ಮಿಕರ ತೊರೆಯುವಿಕೆಯ ನಿರ್ವಹಣೆಯು ಮಾನವ ಸಂಪನ್ಮೂಲ ವಿಭಾಗದ ಪ್ರಮುಖ ಕರ್ತವ್ಯವಾಗಿದೆ. ನೌಕರರು ಉದ್ಯೋಗ ತೊರೆಯುವಿಕೆಯನ್ನು ಒಂದು ನಿರ್ದಿಷ್ಟ ಸಮಯದಲ್ಲಿ ನೌಕರರು ಎಷ್ಟು ಜನ ಕೆಲಸಕ್ಕೆ ಹಾಜರಾಗಿಲ್ಲ ಎಂಬುದನ್ನು ತಾಳೆ ಹಾಕಿ ನೋಡುವುದಾಗಿದೆ, ಈ ಸಮಯದಲ್ಲಿ ವಜಾಗೊಂಡಿರುವ ಉದ್ಯೋಗಿಗಳು, ಕೆಲಸಕ್ಕೆ ಹಾಜರಾಗದೆ ಇರುವ ಉದ್ಯೋಗಿಗಳು ಹಾಗೂ ರಾಜೀನಾಮೆ ನೀಡಿರುವ ನೌಕರರು ಹೀಗೆ ಎಲ್ಲರ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು ಕಾರ್ಮಿಕರ ಸಂಖ್ಯೆಯಿಂದ ಕಳೆದಾಗ ಉದ್ಯೋಗ ತೊರೆದ ಕಾರ್ಮಿಕರ ಸಂಖ್ಯೆ ದೊರೆಯುತ್ತದೆ. ಉದ್ಯೋಗ ತೊರೆಯುವಿಕೆ ಹೇರಳವಾಗಿದ್ದಾಗ, ನೇಮಕಾತಿ ಮತ್ತು ರಾಜೀನಾಮೆ ದರಗಳು ಉದ್ಯೋಗಗಳ ನಡುವೆ ಕಾರ್ಮಿಕರ ಹೆಚ್ಚಿನ ಪ್ರತಿಫಲನವನ್ನು ತೋರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಆರ್ಥಿಕ ಕುಸಿತದ ಅವಧಿಯಲ್ಲಿ ದರಗಳು ಕಡಿಮೆ ಇರುತ್ತವೆ.
 
ಉದ್ಯೋಗ ತೊರೆಯುವಿಕೆ (labour turnover) ವ್ಯಾಖ್ಯಾನಗಳು:
ನೌಕರರು ಉದ್ಯೋಗ ತೊರೆಯುವಿಕೆಯೆಂದರೆ ಒಂದು ಕಂಪನಿಯಲ್ಲಿ ನೌಕರರು ನಿರ್ದಿಷ್ಟ ಸಮಯದಲ್ಲಿ ಉದ್ಯೋಗ ತ್ಯಜಿಸುವುದು ಮತ್ತು ನೇಮಕವಾಗುವುದಾಗಿದೆ ನೌಕರರು ಉದ್ಯೋಗ ತೊರೆಯುವಿಕೆಯು ಹೆಚ್ಚಳವಾದರೆ ಕಂಪನಿಯಲ್ಲಿ ಸಮಸ್ಯೆಗಳು ಉದ್ಬವವಾಗುತ್ತವೆ.

ಡಾ|| ರವೀಂದ್ರ ಬಾಡಿಯವರ ಪ್ರಕಾರ ಉದ್ಯೋಗಿಗಳ ಬಿಡುಗಡೆ ಮತ್ತು ಉದ್ಯೋಗಿಗಳ ಬದಲಿಯಿಂದ ಕಾರ್ಯಪಡೆಯ ಸಂಯೋಜನೆಯಲ್ಲಿ ಕಾಲಕಾಲಕ್ಕೆ ಉಂಟಾಗುವ ಬದಲಾವಣೆ ಆಗಿರುತ್ತದೆ ಎಂದು ಹೇಳಿದ್ದಾರೆ.

ಜಾನ್ ರೆಚ್‍ರವರ ಪ್ರಕಾರ ಕಂಪನಿಯ ಒಂದು ನಿರ್ದಿಷ್ಟ ಅವಧಿಯಲ್ಲಿ ಉದ್ಯೋಗ ತೊರೆಯುವ ಉದ್ಯೋಗಿಯ ಶೇಕಡಾವಾರಾಗಿರುತ್ತದೆ ಎಂದು ತಿಳಿಸಿದ್ದಾರೆ.
 
ಉದ್ಯೋಗ ತೊರೆಯುವಿಕೆಯ ವಿಧಗಳು:
ಕಾರ್ಮಿಕರು ಉದ್ಯೋಗ ತೊರೆಯುವುದರಲ್ಲಿ ಎರಡು ಪ್ರಮುಖ ವಿಧಗಳಿವೆ.
  1. ಸ್ವಯಂ ಪ್ರೇರಿತ ಉದ್ಯೋಗ ತೊರೆಯುವಿಕೆ.
  2. ಅನೈಚ್ಚಿಕ ಉದ್ಯೋಗ ತೊರೆಯುವಿಕೆ.
ಸ್ವಯಂ ಪ್ರೇರಿತ ಉದ್ಯೋಗ ತೊರೆಯುವಿಕೆ: ಸ್ವಯಂ ಪ್ರೇರಿತ ಉದ್ಯೋಗ ತೊರೆಯುವಿಕೆ ಎಂದರೆ ಕಾರ್ಮಿಕರು ತಾವೇ ಸ್ವಯಂ ಪ್ರೇರಿತವಾಗಿ ಉದ್ಯೋಗ ಬಿಡುವುದಾಗಿದೆ ಹಾಗೂ ಸ್ವ ಕಾರಣಗಳಿಂದ ರಾಜೀನಾಮೆ ನೀಡುವುದಾಗಿದೆ.

ಉದಾ: ಕಾರ್ಮಿಕರಿಗೆ ಕೆಲಸದ ಬಗ್ಗೆ ತೃಪ್ತಿ ಇಲ್ಲದಿದ್ದಾಗ, ಕೆಲಸದ ಸ್ಥಳ ಹೊಂದಾಣಿಕೆಯಾಗದೆ ಇದ್ದಾಗ ಮತ್ತು ಬೇರೆಡೆ ಕೆಲಸ ದೊರೆತಾಗ ಸ್ವ ಇಚ್ಚೆಯಿಂದ ಕಾರ್ಮಿಕರು ಉದ್ಯೋಗ ತೊರೆಯುತ್ತಾರೆ.

ಅನೈಚ್ಚಿಕ ಉದ್ಯೋಗ ತೊರೆಯುವಿಕೆ: ಅನೈಚ್ಚಿಕ ಉದ್ಯೋಗ ತೊರೆಯುವಿಕೆ ಎಂದರೆ ಕಾರ್ಮಿಕರು ಕಂಪನಿಯ ಕಾನೂನುಗಳನ್ನು ಮೀರಿದಾಗ ಉದ್ಯೋಗದಾತನು ಅವರನ್ನು ಕೆಲಸದಿಂದ ವಜಾ ಮಾಡುವುದಾಗಿದೆ,
​
ಉದಾ: ಉತ್ಪಾದನಾ ಮಟ್ಟ ಕಡಿಮೆಯಾದಾಗ ಕೆಲಸದಿಂದ ತೆಗೆಯಬಹುದು, ಕಾರ್ಮಿಕರ ಕೆಲಸದ ಕ್ಷಮತೆ ಕಡಿಮೆಯಾದಾಗ ವಜಾಮಾಡಬಹುದು  ಇತರೆ....
 
ಕಾರ್ಮಿಕರು ಉದ್ಯೋಗ ತೊರೆಯಲು ಕಾರಣಗಳು:
ಕಾರ್ಮಿಕರು ಉದ್ಯೋಗ ತೊರೆಯಲು ಎರಡು ರೀತಿಯ ಕಾರಣಗಳನ್ನು ನೀಡಬಹುದಾಗಿದೆ.
  1. ಉದ್ಯೋಗ ತೊರೆಯದಂತೆ ತಪ್ಪಿಸಬಹುದಾದ ಕಾರಣಗಳು.
  2. ಉದ್ಯೋಗ ತೊರೆಯದಂತೆ ತಪ್ಪಿಸಲಾಗದ ಕಾರಣಗಳು.
 
ಉದ್ಯೋಗ ತೊರೆಯದಂತೆ ತಪ್ಪಿಸಬಹುದಾದ ಕಾರಣಗಳು:
  • ಕೆಲಸದ ಬಗ್ಗೆ ತೃಪ್ತಿ ಇಲ್ಲದಿರುವುದು.
  • ಸಂಬಳದ ಬಗ್ಗೆ ತೃಪ್ತಿ ಇಲ್ಲದಿರುವುದು.
  • ಉತ್ತಮವಲ್ಲದ ಕೆಲಸದ ವಾತಾವರಣ.
  • ಕಾರ್ಮಿಕರು ಮತ್ತು ಮೇಲ್ವಿಚಾರಕರ ನಡುವೆ ಉತ್ತಮವಾಗಲ್ಲದಿರುವುದು.
  • ಅಸಮರ್ಪಕ ವೈದ್ಯಕೀಯ ಸೌಲಭ್ಯ ಇತ್ಯಾದಿ.....
 
ಉದ್ಯೋಗ ತೊರೆಯದಂತೆ ತಪ್ಪಿಸಲಾಗದ ಕಾರಣಗಳು:
  • ವೈಯಕ್ತಿಕ ಬೆಳವಣಿಗೆ.
  • ರಾಜೀನಾಮೆ, ಮರಣ ಮತ್ತು ಅಂಗವಿಕಲತೆ.
  • ಆರೋಗ್ಯ ಪರಿಸ್ಥಿತಿ.
  • ಕುಟುಂಬ.
  • ಪರಿಸರದ ಅಂಶಗಳು ಇತರೆ.....
Picture
ಕಾರ್ಮಿಕರು ಉದ್ಯೋಗ ತೊರೆಯುವುದನ್ನು ಲೆಕ್ಕ ಹಾಕುವುದು:
ಕಂಪನಿಗಳಲ್ಲಿ ಕಾರ್ಮಿಕರು ಉದ್ಯೋಗ ತೊರೆಯುವುದನ್ನು ಲೆಕ್ಕ ಹಾಕಲು ಹಲವಾರು ರೀತಿಯ ಸೂತ್ರಗಳನ್ನು ಬಳಸುತ್ತಾರೆ ಅವುಗಳಲ್ಲಿ ಪ್ರಮುಖವಾದದ್ದು ಪ್ರತ್ಯೇಕತೆಯ ಸೂತ್ರ.

ಪ್ರತ್ಯೇಕತೆಯ ಸೂತ್ರ: ಕಾರ್ಮಿಕರು ಉದ್ಯೋಗ ತೊರೆಯುವುದನ್ನು ತಾಳೆ ಮಾಡಲು ಪ್ರತ್ಯೇಕತೆಯ ಸೂತ್ರವನ್ನು ಅತೀ ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಕಾರ್ಮಿಕರು ಉದ್ಯೋಗ ತೊರೆಯಲು ಇರುವ ಎಲ್ಲ ಕಾರಣಗಳು ಅಂದರೆ ವಜಾಮಾಡುವುದು, ವಿಸರ್ಜನೆ ಮಾಡುವುದು, ರಾಜೀನಾಮೆ ಕೊಡುವುದು, ಮರಣ ಹೊಂದುವುದು, ಅಂಗವಿಕಲತೆ ಹೀಗೆ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಮಾಡುವುದರಿಂದ ಸರಿಯಾದ ಲೆಕ್ಕ ದೊರೆಯುತ್ತದೆ.                                                                                                                       ಒಟ್ಟು ಉದ್ಯೋಗ ತೊರೆದವರ ಸಂಖ್ಯೆ
ಸೂತ್ರ:  ಪ್ರತ್ಯೇಕತೆಯ ಸೂತ್ರ: ..................................................................... *100
                                                            ಒಟ್ಟು ಕಾರ್ಮಿಕರ ಸಂಖ್ಯೆ     
 
ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲಾಗುವ ಪರಿಣಾಮಗಳು:
ಅತೀ ಹೆಚ್ಚು ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಉತ್ಪಾದನೆಯ ಮೇಲೆ ಭಾರೀ ಪ್ರಮಾಣದ ಪರಿಣಾಮವಾಗುತ್ತದೆ. ವಸ್ತುವಿನ ಗುಣಮಟ್ಟ ಕಡಿಮೆಯಾಗುವುದು, ಉತ್ಪಾದನಾ ವೆಚ್ಚ ಹೆಚ್ಚಾಗುವುದು ಹೀಗೆ ಹಲವಾರು ಸಮಸ್ಯೆ ಎದುರಾಗುತ್ತವೆ.
  • ಉತ್ಪಾದನೆಯಲ್ಲಿ ಇಳಿಕೆಯಾಗುತ್ತದೆ.
  • ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತದೆ.
  • ಹೊಸ ಕಾರ್ಮಿಕರನ್ನು ಸಿದ್ದ ಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ ಇದರಿಂದ ವಸ್ತುವಿನ ಕ್ಷಮತೆ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ.
  • ಹೊಸ ಕಾರ್ಮಿಕರ ನೇಮಕಾತಿ ಮತ್ತು ತರಬೇತಿಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತದೆ.
  • ಹೊಸ ಕಾರ್ಮಿಕರಿಂದ ಯಂತ್ರಗಳಿಗೆ ತೊಂದರೆಯಾಗುತ್ತದೆ ಹಾಗೂ ತ್ಯಾಜ್ಯ ಅಧಿಕವಾಗುತ್ತದೆ.
  • ಅಪಘಾತಗಳು ಸಂಭವಿಸುವ ಸಾದ್ಯತೆ ಹೆಚ್ಚಾಗಿರುತ್ತದೆ.
  • ಕಂಪನಿಯು ನಷ್ಟವನ್ನು ಅನುಭವಿಸುತ್ತದೆ.
  • ಕಾರ್ಮಿಕರು ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ.
ಕೆಲವೊಮ್ಮೆ ಕಂಪನಿಗಳು ಮುಚ್ಚಲ್ಪಡುತ್ತವೆ ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಎದುರಿಸಬೇಕಾಗುತ್ತದೆ.
 
ಕಾರ್ಮಿಕರು ಉದ್ಯೋಗ ತೊರೆಯುವುದರಿಂದ ಕಾರ್ಮಿಕರ ಮೇಲಾಗುವ ಪರಿಣಾಮಗಳು:
  • ಕಾರ್ಮಿಕರಿಗೆ ದೊರೆಯುವ ಪಿಎಫ್, ಗ್ರ್ಯಾಚುಟಿ, ಬೊನಸ್ ನಷ್ಟವಾಗುತ್ತವೆ.
  • ಬೇರೆ ಕೆಲಸಕ್ಕೆ ಸೇರಿದಾಗ ಅದನ್ನು ಅಳವಡಿಸಿಕ್ಕೊಳ್ಳಲು ಕಷ್ಟವಾಗುತ್ತದೆ.
  • ಹೊಸ ಕಂಪನಿ ಅವರ ಅನುಭವ ಪರಿಗಣಿಸಿ ಬಡ್ತಿ ನೀಡುವುದಿಲ್ಲ.
  • ಕೆಲವೊಂದು ಸಮಯದಲ್ಲಿ ಕಾರ್ಮಿಕರು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.​
Picture
Join Our Conference Google Group
ಕಾರ್ಮಿಕರು ಉದ್ಯೋಗ ತೊರೆಯದಂತೆ ತಡೆಯುವಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರ:
ಮಾನವ ಸಂಪನ್ಮೂಲ ವಿಭಾಗವು ಒಂದು ಸಂಸ್ಥೆಯಲ್ಲಿ ಕಾರ್ಮಿಕರನ್ನು ನಿರ್ವಹಣೆ ಮಾಡುವುದು ಪ್ರಮುಖ ಕಾರ್ಯವಾಗಿರುತ್ತದೆ. ಅದರಂತೆ ಕಾರ್ಮಿಕರು ಉದ್ಯೋಗ ತೊರೆಯದಂತೆ ತಡೆಯಲು ಈ ಕೆಳಗಿನ ಕಾರ್ಯಗಳನ್ನು ಮಾಡಬಹುದಾಗಿದೆ.
  • ಸಂಸ್ಥೆ ಅಥವಾ ಕಂಪನಿಯಲ್ಲಿನ ಕೆಲಸದ ಸ್ಥಳವನ್ನು ಸುರಕ್ಷತೆ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಉದಾ: ಕೆಲಸಗಾರರಿಗೆ ಕಂಪನಿಯಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು.
  • ಕಾರ್ಮಿಕರು ಮತ್ತು ಉದ್ಯೋಗದಾತರ ನಡುವೆ ಸಮನ್ವಯ ಮೂಡಿಸುವುದು ಉದಾ: ಸಂಸ್ಥೆಯ ಎಲ್ಲಾ ಚಟುವಟಿಕೆಗಳಲ್ಲಿ ಕಾರ್ಮಿಕರನ್ನು ಭಾಗವಹಿಸುವಂತೆ ಮಾಡುವುದು ಇದರಿಂದ ಕಾರ್ಮಿಕರಲ್ಲಿ ಒಳ್ಳೆಯ ಬಾಂಧವ್ಯ ಮೂಡಿ ಎಲ್ಲರು ಒಗ್ಗಟ್ಟಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.
  • ನಿಯಮಿತವಾಗಿ ಕಾರ್ಮಿಕರಿಗೆ ಕೆಲಸದ ಬಗ್ಗೆ ತರಬೇತಿ ನೀಡುವುದು ಇದರಿಂದ ಕಾರ್ಮಿಕರಿಗೆ ಹೆಚ್ಚು ಪ್ರೇರಣೆ ದೊರೆಯುತ್ತದೆ ಹಾಗೂ ಕಾರ್ಮಿಕರು ಹೆಚ್ಚು ಉತ್ಸಾಹಿತರಾಗಿ ಕೆಲಸ ನಿರ್ವಹಿಸುತ್ತಾರೆ.
  • ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ, ಆರೋಗ್ಯ, ಪರಿಸರದ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ.
  • ಕಾರ್ಮಿಕರು ಉತ್ತೇಜಿತರಾಗಲು ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನಗಳನ್ನು ನೀಡಬೇಕು ಉದಾ: ಬಡ್ತಿ ನೀಡುವುದು, ಬೋನಸ್ ನೀಡುವುದು.
  • ಕಾರ್ಮಿಕರಿಗೆ ಸೂಕ್ತವಾದ ಪರಿಹಾರ ಒದಗಿಸುವುದು ಉದಾ: ಆಪಘಾತ ಸಂಭವಿಸಿದಾಗ ತಕ್ಷಣ ಪರಿಹಾರ ಕೊಡಿಸುವುದು.
  • ಬಹುಮುಖ್ಯವಾಗಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳವನ್ನು ವಿತರಿಸುವುದು.
  • ಕಾರ್ಮಿಕರು ಉತ್ತೇಜಿಸಲು ಮನೊರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 
ಗ್ರಂಥಋಣ:
  1. Arora, V., and Arora. S., (2011). Human resource management. New Delhi: Global vision publishing house. ( ISBN no 978-81-8220-384-6)
  2. Dr.Badi, R., (2011). Human resource management ( text and cases). Mumbai: Himalaya publishing house
  3. Dessler. G, and Verkkey. B., (2015). Human resource management. , South Asia: Pearson India education services Pvt Ltd. (ISBN no 978-93—325-4219-8)
  4. Jain, N.C. and Saakshi, (2009). Personnel management and human resources. Delhi: A.I.T.B.S. Publisher.  (ISBN no 978-81-7473-282-9)
  5. Dr. Memoria.C. B.,Gankar. S.V., (2003). Personnel Management, Mumbai: Himalaya publishing house
  6. Mandal.S., (2012). Labour turnover. Culcatta.
  7. Noe and yet all. (2007). Human resource management (Gaining a and competitive advantage).
  8. www.wikipedia.com/ labour turnover
0 Comments



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture
    More Details

    Picture
    WhatsApp Group

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

ಪ್ರಶಸ್ತಿಗಳು

  • CSR EXCELLENCE AWARD
  • THE BEST WOMEN EMPOWERMENT ORGANISATION AWARD
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA
  • NIRATHANKA CLUB HOUSE

ಚಂದಾದಾರರಾಗಿ




JOIN OUR ONLINE GROUPS


JOIN WHATSAPP BROADCAST

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
    • ಪ್ರಶಸ್ತಿ ಪುರಸ್ಕೃತರು
  • ಸಮ್ಮೇಳನ-2022
    • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
    • ಮಹಿಳಾ ಸಬಲೀಕರಣ ಪ್ರಶಸ್ತಿ-2022
    • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
  • ಹಿಂದಿನ ಸಮ್ಮೇಳನಗಳು
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ